ಬೆಂಗಳೂರು ನಾಗರತ್ನಮ್ಮ

Sdílet
Vložit
  • čas přidán 29. 08. 2024
  • ಬೆಂಗಳೂರು ನಾಗರತ್ನಮ್ಮನವರು ಕರ್ನಾಟಕ ಸಂಗೀತಕ್ಕೆ ಅಮರ ಕೊಡುಗೆ ನೀಡಿದ ಮಹನೀಯರು.. ತ್ಯಾಗರಾಜರ ಆರಾಧನೆ ಇಂದು ವಿಶ್ವಪ್ರಸಿದ್ಧಿ ಪಡೆದಿದ್ದರೆ ಅದಕ್ಕ ಭದ್ರ ಬುನಾದಿ ಹಾಕಿಕೊಟ್ಟ ಕೀರ್ತಿ ಬೆಂಗಳೂರು ನಾಗರತ್ನಮ್ಮನವರದು. ಹಾಗಾಗಿ ಇಂದು ತಿರುವಯ್ಯಾರಿನಲ್ಲಿ ತ್ಯಾಗರಾಜರ ಸಮಾಧಿಯ ಸನ್ನಿಧಾನದಲ್ಲೇ ನಾಗರತ್ನಮ್ಮನವರ ಸಮಾಧಿ ಇರುವುದು ಸಂಗೀತ ಕ್ಷೇತ್ರಕ್ಕೆ ಅವರ ಕೊಡುಗೆ ಎಷ್ಟು ದೊಡ್ಡದು ಎಂಬುದನ್ನು ಸಾರಿ ಸಾರಿ ಹೇಳುವಂತಿದೆ. ಸಂತ ತ್ಯಾಗರಾಜರ ಸಮಾಧಿಯ ಮೇಲೆ ತನ್ನ ಎಲ್ಲ ತನು ಮನ ಧನಗಳನ್ನು ಅರ್ಪಿಸಿ ಒಂದು ದೇಗುಲ ನಿರ್ಮಿಸಿದ್ದೇ ಅಲ್ಲದೆ, ಅಲ್ಲಿ ಸಂಗೀತಲೋಕದ ಸಕಲರೂ ತ್ಯಾಗರಾಜರ ಆರಾಧನೆ ಸಂದರ್ಭದಲ್ಲಿ ಒಗ್ಗಟ್ಟಾಗಿ ಗೋಷ್ಠಿಗಾನ ಮಾಡುವ ವ್ಯವಸ್ಥೆಯನ್ನು ನಿರ್ಮಿಸಿದ ಅಸಾಧಾರಣ ಸಾಧನೆ ನಾಗರತ್ನಮ್ಮನವರದು.
    ಮಾಹಿತಿ ಕೃಪೆ : www.sallapa.com

Komentáře •