Streeyarellaru Bannire | Shrinivasa Kalyana Haadu

Sdílet
Vložit
  • čas přidán 17. 05. 2024
  • Sung By : Pushpalatha and Anuradha
    Composer : Sri Vadirajaru
    ಸ್ತ್ರೀಯರೆಲ್ಲರು ಬನ್ನಿರೆ । ಶ್ರೀನಿವಾಸನ ಪಾಡಿರೇ
    ಜ್ಞಾನಗುರುಗಳಿಗೊಂದಿಸಿ । ‏ ಮುಂದೆ ಕಥೆಯ ಪೇಳುವೆ ।।
    ಗಂಗತೀರದಿ ಋಷಿಗಳು । ಅಂದು ಯಾಗವ ಮಾಡ್ಡರು
    ಬಂದು ನಾರದ ನಿಂತುಕೊಂಡು । ಯಾರಿಗೆಂದು ಕೇಳಲು
    ಅರಿತು ಬರಾಬೇಕು ಎಂದು । ಆ ಮುನಿಯು ತೆರಳಿದ
    -ಭೃಗುಮುನೀಯು ತೆರಳಿದ
    ನಂದಗೋಪನ ಮಗನ ಕಂದನ । ಮಂದಿರಕಾಗೆ ಬಂದನು
    ವೇದಗಳನೆ ಓದುತಾ । ಹರಿಯನೂ ಕೊಂಡಾಡುತಾ
    ಇರುವ ಬೊಮ್ಮನ ನೋಡಿದ । ಕೈಲಾಸಕ್ಕೆ ಬಂದನು
    ಶಂಭುಕಂಠನು ಪಾರ್ವತೀಯೂ । ಕಲೆತಿರುವುದ ಕಂಡನು
    ಸೃಷ್ಟಿಯೊಳಗೆ ನಿನ್ನ ಲಿಂಗ । ಶ್ರೇಷ್ಠವಾಗಲೆಂದನು
    ವೈಕುಂಠಕ್ಕೆ ಬಂದನು । ವಾರಿಜಾಕ್ಷನ ಕಂಡನು
    ಕೆಟ್ಟ ಕೋಪದಿಂದ ಒದ್ದರೆ । ಎಷ್ಟು ನೊಂದಿತೆಂದನು
    ತಟ್ಟನೆ ಬಿಸಿನೀರಿನಿಂದ । ನೆಟ್ಟಗೆ ಪಾದ ತೊಳೆದನು
    ಬಂದ ಕಾರ್ಯ ಆಯಿತೆಂದು । ಅಂದು ಮುನಿಯು ತೆರಳಿದ
    ಬಂದು ನಿಂದು ಸಭೆಯೊಳಗೆ । ಇಂದಿರೇಶನ ಹೊಗಳಿದ
    ಪತಿಯ ಕೂಡೆ ಕಲಹ ಮಾಡಿ । ಕೊಲ್ಹಾಪುರಕೆ ಹೋದಳು
    ಸತಿಯು ಪೋಗೆ ಪತಿಯು ಹೊರಟು । ಗಿರಿಗೆ ಬಂದು ಸೇರಿದ
    ಹುತ್ತದಲ್ಲೆ ಹತ್ತು ಸಾವಿರ ವರುಷ । ಗುಪ್ತವಾಗಿ ಇದ್ದನು
    ಬ್ರಹ್ಮ ಧೇನುವಾದನು । ರುದ್ರ ವತ್ಸನಾದನು
    ಧೇನು ಮುಂದೆ ಮಾಡಿಕೊಂಡು । ಗೋಪಿ ಹಿಂದೆ ಬಂದಳು
    ಕೋಟ ಹೊನ್ನು ಬಾಳುವೋದು । ಕೊಡದ ಹಾಲು ಕರೆವುದು
    ಪ್ರೀತಿಯಿಂದಲು ತನ್ನ ಮನೆಗೆ । ತಂದುಕೊಂಡನು ಚೋಳನು
    ಒಂದು ದಿವಸ ಕಂದಗೆ ಹಾಲು । ಚೆಂದದಿಂದಲಿ ಕೊಡಲಿಲ್ಲ.
    ಅಂದು ರಾಯನ ಮಡದಿ ಕೋಪಿಸಿ । ಬಂದು ಗೋಪನ ಹೊಡೆದಳು
    ಧೇನು ಮುಂದೆ ಮಾಡಿಕೊಂಡು । ಗೋಪ ಹಿಂದೆ ನಡೆದನು
    ಕಾಮಧೇನು ಕರೆದ ಹಾಲು । ಹರಿಯ ಶಿರಕೆ ಬಿದ್ದಿತು
    ಇಷ್ಟು ಕಷ್ಟ ಬಂದಿತೆಂದು । ಪೆಟ್ಟು ಬಡಿಯೆ ಹೋದನು
    ಕೃಷ್ಣ ತನ್ನ ಮನದಲ್ಯೋಚಿಸಿ । ಕೊಟ್ಟ ತನ್ನ ಶಿರವನು
    ಏಳು ತಾಳೆಮರದ ಉದ್ದ । ಏಕವಾಗಿ ಹರಿಯಿತು
    ರಕ್ತವನ್ನು ನೋಡಿ ಗೋಪ । ಮತ್ತೆ ಸ್ವರ್ಗಕ್ಕೇರಿದ
    ಕಷ್ಟವನ್ನು ನೋಡಿ ಗೋವು । ಅಷ್ಟು ಬಂದ್-ಹೇಳಿತು
    ತಟ್ಟನೆ ರಾಯ ಎದ್ದು ಗಿರಿಗೆ । ಬಂದು ಬೇಗ ಸೇರಿದ
    ಏನು ಕಷ್ಟ ಇಲ್ಲಿ ಹೀಗೆ । ಯಾವ ಪಾಪಿ ಮಾಡಿದ
    ಇಷ್ಟು ಕಷ್ಟ ಕೊಟ್ಟವಾಗೆ । ಭ್ರಷ್ಟಪಿಶಾಚಿಯಾಗೆಂದ
    ಪೆಟ್ಟು ವೇದನೆ ತಾಳಲಾರದೆ । ಬೃಹಸ್ಪತೀಯ ಕರೆಸಿದ
    ಅರುಣ ಉದಯದಲ್ಲೆದ್ದು । ಔಷಧಕ್ಕೆ ಪೋದನು
    ಕ್ರೋಡರೂಪಿಯ ಕಂಡನು । ಕೂಡಿ ಮಾತನಾಡಿದನು
    ಇರುವುದಕ್ಕೆ ಸ್ಥಳವು ಎನಗೆ । ಎರ್ಪಾಡಾಗಬೇಕೆಂದ
    ನೂರು ಪಾದ ಭೂಮಿ ಕೊಟ್ಟರೆ । ಮೊದಲು ಪೂಜೆ ನಿಮಗೆಂದ
    ಪಾಕ ಪಕ್ವ ಮಾಡುವುದಕ್ಕೆ । ಆಕೆ ಬಕುಳೆ ಬಂದಳು
    ಭಾನುಕೋಟಿತೇಜನೀಗ । ಬೇಟೆಯಾಡ ಹೊರಟನು
    ಮಂಡೆ ಬಾಚಿ ದೊಂಡೆ ಹಾಕಿ । ದುಂಡುಮಲ್ಲಿಗೆ ಮುಡಿದನು
    ಹಾರ ಪದಕ ಕೊರಳಲ್ಹಾಕಿ । ಫಣೆಗೆ ತಿಲಕವಿಟ್ಟನು
    ಅಂಗುಲಿಗೆ ಉಂಗುರ । ರಂಗಶ್ವಂಗಾರವಾದವು
    ಪಟ್ಟೆನುಟ್ಟು ಕಚ್ಚೆ ಕಟ್ಟಿ । ಪೀತಾಂಬರವ ಹೊದ್ದನು
    ಢಾಳು ಕತ್ತಿ ಉಡಿಯಲ್ ಸಿಕ್ಕಿ । ಜೋಡು ಕಾಲಲ್ಲಿ ಮೆಟ್ಟಿದ
    ಕರದಿ ವೀಳ್ಯವನ್ನೆ ಪಿಡಿದು । ಕನ್ನದೀಯ ನೋಡಿದ
    ಕನಕಭೂಷಣವಾದ ತೊಡಿಗೆ । ಕಮಲನಾಭ ತೊಟ್ಟನು
    ಕನಕಭೂಷಣವಾದ ಕುದುರೆ । ಕಮಲನಾಭ ಏರಿದ
    ಕರಿಯ ಹಿಂದೆ ಹರಿಯು ಬರಲು । ಕಾಂತೆರೆಲ್ಲ ಕಂಡರು
    ಯಾರು ಇಲ್ಲಿ ಬರುವರೆಂದು । ದೂರ ಪೋಗಿರೆಂದರು
    ನಾರಿಯರಿರುವ ಸ್ಥಳಕೆ । ಯಾವ ಪುರುಷ ಬರುವನು
    ಎಷ್ಟು ಹೇಳೆ ಕೇಳ ಕೃಷ್ಣ । ಕುದುರೆ ಮುಂದೆ ಬಿಟ್ಟನು
    ಅಷ್ಟು ಮಂದೀರೆಲ್ಲ ಸೇರಿ । ಪೆಟ್ಟುಗಳನು ಹೊಡೆದರು
    ಕಲ್ಲುಮಳೆಯ ಕರೆದರಾದ । ಕುದುರೆ ಕೆಳಗೆ ಬೀದ್ದಿತು
    ಕೇಶ ಬಿಚ್ಚಿ ವಾಸುದೇವ । ಶೇಷಗಿರಿಗೆ ಬಂದನು
    ಪರಮಾನ್ನ ಮಾಡಿದ್ದೇನೆ । ಉಣ್ಣು ಬೇಗ ಎಂದಳು
    ಅಮ್ಮ ಎನಗೆ ಅನ್ನ ಬೇಡ । ಎನ್ನ ಮಗನೆ ವೈರಿಯೇ
    ಕಣ್ಣಿಲ್ಲಾದ ದೈವ ಅವಳ । ನಿರ್ಮಾಣವ ಮಾಡಿದ
    ಯಾವ ದೇಶ ಯಾವೋಳಾಕೆ । ಎನಗೆ ಪೇಳು ಎಂದಳು
    ನಾರಾಯಣನ ಪುರಕೆ ಪೋಗಿ । ರಾಮಕೃಷ್ಣರ ಪೂಜಿಸಿ
    ಕುಂಜಮಣಿಯ ಕೊರಳಲ್ಹಾಕಿ । ಕೂಸಿನ್ ಕೊಂಕಳಲೆತ್ತಿದಾ
    ಧರಣಿದೇವಿಗೆ ಕಣಿಯ ಹೇಳಿ । ಗಿರಿಗೆ ಬಂದು ಸೇರಿದ
    ಕಾಂತೆರೆಲ್ಲ ಕೂಡಿಕೊಂಡು । ಆಗ ಬಕುಳೆ ಬಂದಳು
    ಬನ್ನಿರೆಮ್ಮ ಸದನಕೆನುತ । ಬಹಳ ಮಾತನಾಡಿದರು
    ತಂದೆತಾಯಿ ಬಂಧುಬಳಗ । ಹೊನ್ನು ಹಣ ಉಂಟೆ0ದರು
    ಇಷ್ಟು ಪರಿಯಲ್ಲಿದ್ದವಗೆ । ಕನ್ಯೆ ಯಾಕೆ ದೊರೆಕ್ಲಿಲ್ಲಾ
    ದೊಡ್ಡವಳಿಗೆ ಮಕ್ಕಳಿಲ್ಲ । ಮತ್ತೆ ಮದುವೆ ಮಾಡ್ವೆವು
    ಬೃಹಸ್ಪತೀಯ ಕರೆಸಿದ । ಲಗ್ನಪತ್ರಿಕೆ ಬರೆಸಿದ (ಕಳುಹಿದ)
    ವನ್ನಭೇನ ಕರೆವುದಕ್ಕೆ । ಕೊಲ್ಹಾಪುರಕೆ ಪೋದರು
    ಗರುಡನ್ ಹೆಗಲನೇರಿಕೊಂಡು । ಬೇಗ ಹೊರಟುಬಂದರು
    ಅಷ್ಟವರ್ಗವನ್ನು ಮಾಡಿ । ಇಷ್ಟದೇವರನ್ನು ಪೂಜಿಸಿ
    ಲಕ್ಷ್ಮೀಸಹಿತ ಆಕಾಶರಾಜನ । ಪಟ್ಟಣಕ್ಕೆ ಬಂದರು
    ಕನಕಭೂಷಣವಾದ ತೊಡಿಗೆ । ಕಮಲನಾಥ ತೊಟ್ಟನು
    ಕನಕಭೂಷಣವಾದ ಮಂಟಪ । ಕಮಲನಾಭ ಏರಿದ
    ಕಮಲನಾಭಗೆ ಕಾಂತೆಮಣಿಯ । ಕನ್ಯದಾನವ ಮಾಡಿದ
    ಕಮಲನಾಭ ಕಾಂತೆ ಕೈಗೆ । ಕಂಕಣವನ್ನೆ ಕಟ್ಟಿದ
    ಶ್ರೀನಿವಾಸ ಪದ್ಮಾವತಿಗೆ । ಮಾಂಗಲ್ಯವನೆ ಕಟ್ಟಿದ
    ಶ್ರೀನಿವಾಸನ ಮದುವೆ ನೋಡೆ । ಸ್ಟೀಯರೆಲ್ಲರು ಬನ್ನಿರೇ
    ಪದ್ಮಾವತಿಯ ಮದುವೆ ನೋಡೆ । ಮುದ್ದು ಬಾಲೆಯರ್ ಬನ್ನಿರೇ
    ಶಂಕೆಯಿಲ್ಲದೆ ಹಣವ ಸುರಿದು । ವೆಂಕಟೇಶನ ಕಳುಹಿದ
    ಲಕ್ಷ ತಪ್ಪು ಎನ್ನಲುಂಟು । ಪಕ್ಷಿವಾಹನ ಸಲಹೆನ್ನ
    ಭಕ್ತಿಯಿಂದಲಿ ಹೇಳ್ಕೇಳ್ದವರಿಗೆ । ಮುಕ್ತಿ ಕೊಡುವ ಹಯವದನ
    ಜಯ ಜಯ ಶ್ರೀನಿವಾಸನಿಗೆ । ಜಯ ಜಯ ಪದ್ಮಾವತಿಗೆ
    ಬಲಿದಂತಹ ಶ್ರೀಹರಿಗೆ । ನಿತ್ಯ ಶುಭಮಂಗಳ
    ಶೇಷಾದ್ರಿಗಿರಿವಾಸ । ಶ್ರೀದೇವಿ ಅರಸಗೆ
    ಕಲ್ಯಾಣಮೂರುತಿಗೆ । ನಿತ್ಯಜಯಮಂಗಳ
  • Hudba

Komentáře • 2

  • @gayatridevi3484
    @gayatridevi3484 Před měsícem

    Tumba melody chanting ❤
    Kannada lyrics idre chennagittu yendu nanna anisike

    • @RelaxingRagas
      @RelaxingRagas  Před měsícem

      Thank you 🙏🏼 kannada lyrics are provided in the caption. Please do check 😊